ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ
ಶಿವಬಲ್ಲ ಸಿಹಿಬೆಲ್ಲ ಆಗಬೇಕು
ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ
ರಾವಣನ ರಂಬಾಟ ನಿಲ್ಲಬೇಕು

ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು
ಬೇಲಿಮುಂಗಲಿ ಕಣ್ಣು ನಿಲ್ಲಬೇಕು.
ಓ ಅಕ್ಕ ಓ ತಾಯಿ ನನ್ನವ್ವ ನನದೇವಿ
ತಾಯಿಯೆಂಬುವ ಬೆಳಗು ತುಂಬಬೇಕು

ಕಣ್ಣೊಳಗ ಶಿವತುಂಬಿ ಮಳೆತುಂಬಿ ಹೊಳೆತುಂಬಿ
ಹರಹರಾ ಹರನೆಂಬ ಹಾಡುಬರಲಿ
ಕಣ್ಣು ಕವಳಿಯ ಹಣ್ಣು ರುಚಿಯ ನಿಂಬೆಯ ಹಣ್ಣು
ಶಾಂತಿಸಾಗರ ಸುರಿದು ತುಂಬಿ ಬರಲಿ

ಎದಿಯೊಳಗ ಶಿವಲಿಂಗ ನಿಜಲಿಂಗ ಚಿಲ್ಲಿಂಗ
ತಲಿಯೊಳಗ ಘನಲಿಂಗ ತೂಗಾಡಲಿ
ಓ ಅಯ್ಯ ಅಪ್ಪಯ್ಯ ಚನ್ನಯ್ಯ ಚಲುವಯ್ಯ
ಪಂಚಲಿಂಗೇಶ್ವರನೆ ಕುಣಿದಾಡಲಿ.


Previous post ಬಡ್ಜಟ್
Next post ಚಕ್ರವ್ಯೂಹ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys